ಲೇಖಕರು: ಡಾ. ಪಿ. ಚಂದ್ರಿಕಾ ಮತ್ತು ಡಾ. ಶರಣು ಹುಲ್ಲೂರು ಬೆಲೆ: 70/- ಪುಟಗಳು: 74 ಪ್ರಕಾಶನ: ಚಿತ್ತಾರ, ಬೆಂಗಳೂರು ......................................... ಚಂದ್ರಿಕಾ ಮತ್ತು ಶರಣು ಅವರು ಬರೆದ ಈ ಹೊತ್ತಗೆಯನ್ನು ನೋಡುತ್ತಾ ನನಗೆ ಸಂತಸವಾಗುತ್ತಿದೆ. ಏಕೆಂದರೆ ನನಗೆ ಗೊತ್ತಿರುವ ಮಟ್ಟಿಗೆ ಇದು ಕನ್ನಡ ಕಾವ್ಯದ ಸಂದರ್ಭದಲ್ಲಿ ಪ್ರಥಮ. ಪದ್ಯಕ್ಕೆ ಪದ್ಯ ಸಂವಾದಿಯಾಗಿ ಹುಟ್ಟುವುದು ವಿರಳ. ಬೇಂದ್ರೆ ಅವರಂತಹ ಹಿರಿಯರು ತಾವೇ ಬರೆದ 'ಹಕ್ಕಿ ಹಾರುತಿದೆ ನೋಡಿದಿರಾ'ಗೆ ಪರ್ಯಾಯವಾಗಿ 'ಬೆಕ್ಕು ಹಾರುತಿದೆ' ಎಂದು ಬರೆದದ್ದುಂಟು. ದಾಸ ಸಾಹಿತ್ಯದ ಹಲವು ಪದ್ಯಗಳಿಗೆ ಪರ್ಯಾಯವಾಗಿ ದಾಸರುಗಳು ಪದ್ಯ ರಚಿಸಿದ್ದುಂಟು. ಆದರೆ ಪದ್ಯಕ್ಕೆ ಪದ್ಯ ಎಂಬಂತೆ ಕಾವ್ಯ ರಚನೆಯಾಗಿ ಅದು ಹೊತ್ತಿಗೆಯಾಗಿ ಬಂದಿರುವುದು ಇದೇ ಪ್ರಥಮ. ಆ ದೃಷ್ಟಿಯಿಂದ ನನ್ನ ಗೆಳೆಯರ ಈ ಪ್ರಯತ್ನ ಖುಷಿ ಕೊಡುವಂತಹದ್ದು.
-ಬಿ. ಸುರೇಶ (ಬೆನ್ನುಡಿಯಿಂದ)