ಲೇಖಕರು: ನರಹಳ್ಳಿ ಬಾಲಸುಬ್ರಹ್ಮಣ್ಯ
ಪ್ರಕಾಶನ: ಅಭಿನವ, ಬೆಂಗಳೂರು
ಪುಟಗಳು: 304, ಬೆಲೆ: 400/-
ರಿಯಾಯಿತಿ 10%
ISBN: 978-81-945570-6-7
................
ನಮ್ಮಲ್ಲಿ ಕಾಲ’ ಮತ್ತು
ಕ್ರಿಯೆ’ ಎಂಬೆರಡು ಶಬ್ದಗಳಿವೆ. ಇವು ವರ್ತಮಾನವನ್ನೂ ನಿರಂತರತೆಯನ್ನೂ ಸೂಚಿಸುವಂಥವು. ‘ಪದಸೋಪಾನ’ದ ಬರಹಗಳಿಗೆ ಈ ಹಿನ್ನೆಲೆಯಿದೆ. ಅವು ವರ್ತಮಾನ’ದ ತಲ್ಲಣಗಳಿಗೆ ಸ್ಪಂದಿಸುತ್ತಲೇ
ನಿರಂತರತೆ’ಯನ್ನು ಧ್ಯಾನಿಸುತ್ತವೆ.
ಭಾಷೆ, ಸಾಹಿತ್ಯ, ಪರಿಸರ, ಪ್ರವಾಸ, ತತ್ವಜ್ಞಾನ, ಚರಿತ್ರೆ, ಪುರಾಣ, ವಿಜ್ಞಾನ, ಅಹಾರ, ಧರ್ಮ, ಪ್ರಭುತ್ವ, ಹೀಗೆ ಈ ಬರಹಗಳ ವಿಸ್ತಾರ, ವೈವಿಧ್ಯ ಬೆರಗು ಮೂಡಿಸುವಂತಿದೆ. ನಿಂತ ನೆಲದಲ್ಲಿ ಗಟ್ಟಿಯಾಗಿ ಕಾಲೂರಿ ಜಗತ್ತನ್ನು ಒಳಗೊಳ್ಳುವ ಇಲ್ಲಿಯ ರಚನಾವಿನ್ಯಾಸ ಅಂಕಣ’ವನ್ನು ಮೀರಿ
ಆಕಾರ’ ಪಡೆಯುವಂಥದು. ವ್ಯಕ್ತಿ’ಯನ್ನು ಮೀರಿ
ವ್ಯಕ್ತಿತ್ವ’ವನ್ನು ಪ್ರಕಟಪಡಿಸುವಂಥದು.
ಜಾನಪದ’ದಿಂದ
ಜಾಗತಿಕ’ದವರೆಗಿನ ವಿಸ್ತಾರ ಅಧ್ಯಯನ, ಆಳವಾದ ಪರಿಶ್ರಮ; ನರಹಳ್ಳಿಯವರ ಬರವಣಿಗೆಯ ಲಯ’ವನ್ನು ರೂಪಿಸಿದ್ದರೂ, ಅದರ ಅಂತಃಸತ್ವ ಅಡಗಿರುವುದು
ಕನ್ನಡ ಬಹುತ್ವ ಪರಂಪರೆ’ಯಲ್ಲಿಯೇ.
ಎಲ್ಲವನ್ನೂ, ಎಲ್ಲರನ್ನೂ ಬಿಡಿ’ಯಾಗಿಯಲ್ಲದೆ
ಇಡಿ’ಯಾಗಿ ನೋಡಬೇಕೆನ್ನುವ ಅವರ ‘ಸಮಗ್ರ ನೋಟ’ ನಿಲವುಗಳು ಸಹಜವಾಗಿ ಪ್ರಕಟಗೊಂಡಿವೆ.
(ಬೆನ್ನುಡಿಯಿಂದ)