ಲೇಖಕರು: ಎಚ್.ಎಸ್. ಗೋಪಾಲ ರಾವ್ ಬೆಲೆ: 250/- ಪುಟಗಳು: 248 ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು. .................. ಶಾಸನಗಳನ್ನು ಇತಿಹಾಸದ ಅಧ್ಯಯನಕ್ಕೆ ಆಕರಗಳಾಗಿ ಬಳಸಿಕೊಳ್ಳುವುದು ಮೊದಲಿನಿಂದಲೂ ನಡೆದುಬಂದಿರುವ ಪದ್ಧತಿ. ನಂತರ ಶಾಸನಗಳು ಸಂಸ್ಕøತಿ ಮತ್ತು ಭಾಷೆಯ ಅಧ್ಯಯನಕ್ಕೂ ಮಹತ್ವವನ್ನು ದೊರಕಿಸಿಕೊಟ್ಟಿವೆ. ಈ ನಿಟ್ಟಿನಲ್ಲಿ ಕವಿರಾಜಮಾರ್ಗಕ್ಕೆ ಮೊದಲಿನ ಭಾಷೆಯ ವಿಚಾರವಾಗಿ ತಿಳಿಯಲು ಶಾಸನಗಳೇ ಪ್ರಮುಖ ಆಕರಗಳು. ಮೈಸೂರು ಒಡೆಯರ ಆಳ್ವಿಕೆಯಲ್ಲೂ ಶಾಸನಗಳ ಮೂಲಕ ಹಲವು ವಿಚಾರಗಳು ತಿಳಿದಿವೆ. ಆದ್ದರಿಂದ ಭಾಷೆಯ ಬದಲಾದ ಸ್ವರೂಪವನ್ನು ತಿಳಿಯಲು ಶಾಸನಗಳು ನೆರವಿಗೆ ಬರುತ್ತವೆಂಬ ಕಾರಣದಿಂದ, ಆ ಕುರಿತು, ನಾನು ಮಾಡಿದ್ದ ಕೆಲವು ಭಾಷಣಗಳು ಮತ್ತು ಬರೆದಿದ್ದ ಲೇಖನಗಳನ್ನು ಒಟ್ಟುಗೂಡಿಸಿ, ನಿಮ್ಮ ಮುಂದಿಡುತ್ತಿದ್ದೇನೆ. ಇದು ಕೆಲವರಿಗಾದರೂ ಉಪಯೋಗಕ್ಕೆ ಬಂದರೆ ಸಂತೋಷಪಡುವವನು ನಾನು.
-ಎಚ್. ಎಸ್. ಗೋಪಾಲ ರಾವ್