ಸಂಪಾದಕರು: ಮುರಳೀಧರ ಉಪಾಧ್ಯ ಹಿರಿಯಡಕ ಬೆಲೆ: 500/- ಪುಟಗಳು: 424 ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು ..................... ವೈದೇಹಿಯವರ ಕೃತಿಗಳನ್ನು ಕುರಿತು ಅವಿಮರ್ಶಕನ ಸ್ತುತಿ ಕಾಣಿಸುವುದಿಲ್ಲ, ಗಂಭೀರವಾದ ವಿಮರ್ಶೆ ನಡೆದಿದೆ. ಓದುಗರು, ಸಾಹಿತ್ಯ ವಿದ್ಯಾರ್ಥಿಗಳು ಮತ್ತು ವಿಮರ್ಶಕರಿಗಾಗಿ ವೈದೇಹಿ ಅವರ ಕೃತಿಗಳನ್ನು ಕುರಿತ ವಿಮರ್ಶೆಯನ್ನು ಸಂಕಲಿಸುವುದೇ ಈ ಗ್ರಂಥದ ಸಂಪಾದನೆಯಲ್ಲಿ. ನನ್ನ ಮುಖ್ಯ ಉದ್ದೇಶ. ವೈದೇಹಿ ಅವರ ಕೃತಿಗಳ ಕುರಿತು ಬರೆದವರೆಲ್ಲ ತಾನೇ ಅವರ ಕುರಿತು ಬರೆಯುತ್ತಿರುವ ಮೊದಲಿಗರು ಎಂಬಂತೆ ಬರೆದಿದ್ದಾರೆ. ಒಂದು ಕೃತಿಯ ಕುರಿತು ಈ ಮೊದಲು ಬಂದ ವಿಮರ್ಶೆಯನ್ನು ಗಮನಿಸಿ, ಸಂವಾದವನ್ನು ಮುಂದುವರಿಸುವಂತೆ ಬರೆದವರು ಕಾಣಿಸುವುದಿಲ್ಲ. ಈ ಗ್ರಂಥದಲ್ಲಿರುವ ರಾಜೇಂದ್ರ ಚೆನ್ನಿ, ಬಿ. ಎನ್. ಸುಮಿತ್ರಾಬಾಯಿ, ಎಚ್. ಎಸ್. ರಾಘವೇಂದ್ರರಾವ್, ಆಶಾದೇವಿ ಎಂ. ಎಸ್. ಜಿ. ರಾಜಶೇಖರ್ ಅವರ ವಿಮರ್ಶೆಗಳು ವೈದೇಹಿ ಅವರ ಕೃತಿಗಳನ್ನು ಕುರಿತ ಸಮೂಹ ಶೋಧವನ್ನು ಮುಂದುವರಿಸಲು ಪ್ರೇರಣೆ ನೀಡುವಂತಿವೆ. ಈ ಸಂಪಾದಕೀಯದಲ್ಲಿ ವ್ಯದೇಹಿ ಅವರ ಕೃತಿಗಳನ್ನು ಕುರಿತ ವಿಮರ್ಶೆಗಳು ಮುಖಾಮುಖಿಯಾಗಿವೆ. ಸಂಪಾದಕನಾದ ನಾನು ಈ ಮುಖಾಮುಖಿಯ ನಡುವೆ ಟೀಕೆ-ಟಿಪ್ಪಣಿ ಮಾಡಲು ಹೋಗಿಲ್ಲ. ಇದಕ್ಕೆ ಕಾರಣ ವಿಮರ್ಶೆಯ ವಿಮರ್ಶೆ ಸುಲಭದ ಕೆಲಸವೇನೂ ಅಲ್ಲ, ಅವಸರದ ತೀರ್ಮಾನಗಳು ಸರಿಯಲ್ಲ. ಇನ್ನು ಮುಂದೆ ವೈದೇಹಿ ಅವರ ಕೃತಿಗಳನ್ನು ವಿಮರ್ಶಿಸುವವರು ಈ ಗ್ರಂಥದಲ್ಲಿರುವ ವಿಮರ್ಶೆಯ ಮುಖಾಮುಖಿಯನ್ನು ಅಲಕ್ಷಿಸುವಂತಿಲ್ಲ. ನಾನು ಸಂಪಾದಿಸಿದ ‘ಯು. ಆರ್. ಅನಂತಮೂರ್ತಿ-ಜೀವನ ಹಾಗೂ ಕೃತಿಗಳ ಸಮೂಹ ಶೋಧ’ (2000) ಪ್ರಕಟವಾದಾಗ ಅದರಲ್ಲಿದ್ದ ಹೊಸತನವನ್ನು ಗುರುತಿಸಿ ಪ್ರೋತ್ಸಾಹಿಸಿದ ಹಿರಿಯ ವಿಮರ್ಶಕ ಜಿ. ಎಸ್. ಆಮೂರ ಅವರಿಗೆ ಕೃತಜ್ಞತೆಗಳು.
-ಮುರಳೀಧರ ಉಪಾಧ್ಯ ಹಿರಿಯಡಕ (ಸಂಪಾದಕರ ಮಾತುಗಳಿಂದ)