ಲೇಖಕರು: ಎಚ್.ಎಸ್. ರಾಘವೇಂದ್ರರಾವ್ ಬೆಲೆ: 150/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು
ಸಾಕಷ್ಟು ವರ್ಷಗಳಿಂದ ಅಲಭ್ಯವಾಗಿದ್ದ ಈ ಕೃತಿಯು ಈಗ ಅಭಿನವದಿಂದ ಪರಿಷ್ಕೃತ, ವಿಸ್ತೃತ ಆವೃತ್ತಿ ಮುದ್ರಣಗೊಂಡಿದೆ...
ಇದು ಪ್ರಗತಿಶೀಲತೆ ಎಂಬ ಪರಿಕಲ್ಪನೆ ಮತ್ತು ಕನ್ನಡದ ಪ್ರಗತಿಶೀಲ ಸಾಹಿತ್ಯವನ್ನು ಕುರಿತ ಕೆಲವು ಬರೆಹಗಳ ಸಂಕಲನ. ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ 1990 ರಲ್ಲಿ ಬರೆದ ‘ಪ್ರಗತಿಶೀಲತೆ’ ಎಂಬ ಹೊತ್ತಿಗೆಯು ಇದರ ಮುಖ್ಯ ಭಾಗ. ಅದರ ಸಂಗಡ, ಅದೇ ವಿಷಯವನ್ನು ಕುರಿತ ಮೂರು ಲೇಖನಗಳು ಸೇರಿಕೊಂಡಿವೆ. ಇವು ಪರಸ್ಪರ ಪೂರಕವಾಗಿವೆಯೆಂದು ನನ್ನ ತಿಳಿವಳಿಕೆ. ಇನ್ನೂ ಕೆಲವು ಪ್ರಮುಖ ಪ್ರಗತಿಶೀಲ ಲೇಖಕರ ಬರವಣಿಗೆಯನ್ನು ಕುರಿತು ಬರೆಯುವ ಅಪೇಕ್ಷೆಯು ಇನ್ನೂ ಕಾರ್ಯಗತವಾಗಿಲ್ಲ. ಈ ಬರಹಗಳು ಹಳೆಯವಾದರೂ ಪ್ರಸ್ತುತವಾಗಿವೆಯೆಂದು ನಂಬಿದ್ದೇನೆ. ಇದು ನಿರ್ದಿಷ್ಟ ಕಾಲಾವಧಿಯಲ್ಲಿ ಜರುಗಿದ ಸಾಹಿತ್ಯಕ ಚಳುವಳಿ ಮತ್ತು ಅದರ ಮುಂಚಾಚುಗಳಿಗೆ ಸೀಮಿತವಾಗಿರುವುದರಿಂದ ಇವರಷ್ಟೇ ಪ್ರಗತಿಪರರಾದ, ಇವರಿಗಿಂತ ಪ್ರತಿಭಾವಂತರಾದ ಹತ್ತು ಹಲವು ದಲಿತ-ಬಂಡಾಯ ಲೇಖಕರನ್ನು ಕುರಿತ ಲೇಖನಗಳನ್ನು ಇಲ್ಲಿ ಸೇರಿಸಿಲ್ಲ.
-ಎಚ್.ಎಸ್. ರಾಘವೇಂದ್ರರಾವ್ (ಲೇಖಕರ ಮಾತಿನಿಂದ)