ಅಕಾಲಿಕವಾಗಿ ತೀರಿಕೊಂಡ ಕವಿ ಎನ್.ಕೆ. ಹನುಮಂತಯ್ಯ ಅವರ ಈ ತನಕದ ಕವಿತೆಗಳನ್ನು ‘ಮಾಂಸದಂಗಡಿಯ ನವಿಲು’ವಿನಲ್ಲಿ ಸಂಕಲಿಸಲಾಗಿದೆ. ಅವರು ಕನ್ನಡಕ್ಕೆ ಹೊಸದೆನ್ನಿಸುವ ರೂಪಕಜಗತ್ತನ್ನು ಸೃಷ್ಟಿಸಿದ ಪ್ರತಿಭಾವಂತ ಯುವಕವಿಯಾಗಿದ್ದರು.‘ಅಸ್ಪೃಶ್ಯ!/ ಹೌದು; ನಾನು ಗೋವು ತಿಂದು/ ಗೋವಿನಂತಾದವನು/ ನೀವು ನೀಡುವ ಮೇವು ತಿಂದು/ ನಿಮ್ಮಂಥ ಮನುಷ್ಯನಾಗಲಾರೆ/ ಮನುಷ್ಯರನ್ನು ತಿನ್ನಲಾರೆ’ (ಗೋವು ತಿಂದು ಗೋವಿನಂತಾದವನು – ಪು.88) ಎಂಬ ಸಾಲುಗಳು ಹೊಸ ರೂಪಕವನ್ನು ಕನ್ನಡ ಕಾವ್ಯದ ಓದುಗರ ಎದುರಿಗಿಟ್ಟಿದ್ದವು.